ಹೊಸ ಉಲ್ಲಾಸ ಮೂಡಿದೆ ಮನದಲಿ
ಚಿಗುರಿದೆ ಬಯಕೆಯು ಮೊಗ್ಗುಗಳಲಿ
ತುಂಬಿದೆ ಎನಗೆ ಮಾತಲ್ಲಿ ಹುರುಪು
ಚೆಲ್ಲಿದೆ ಬಾಳಲ್ಲಿ ಬಣ್ಣಗಳ ಹೊಳಪು
ನಿನ್ನ ಸ್ಪರ್ಶದಲಿ ಏನಿದೆ ಮಾಯೆಯೊ
ಮಳೆ ಬಿದ್ದು ತಂಪಾದ ಧರೆಯಾದೆನಲ್ಲೆ
ಚಿಲಿಪಿಲಿ ಹಕ್ಕಿಗಳ ಇಂಚರವು ನೀ ನಗಲು
ದುಃಖವ ಮರೆಸಿ ನೀ ತಂದೆ ಸುಖದ ಹೊನಲು
ಎಂದೆಂದು ನೀನಿರು ಉಸಿರಾಗಿ ನನ್ನುಸಿರಲ್ಲಿ
ನನ್ನ ಹೃದಯ ಬಡಿದಾಗ ಅದರ ಬಡಿತ ಆಗು ಅಲ್ಲಿ
ಪ್ರೀತಿಯ ದೇಗುಲ ಬೆಳಗು ಬಂದಿಲ್ಲಿ
ಜೀವವ ತುಂಬು ನನ್ನಯ ಬಾಳಲ್ಲಿ
ರಚನೆ: ಶಶಿಕುಮಾರ್ ವಿ. ಕುಲಾಲ್
ಚಿಗುರಿದೆ ಬಯಕೆಯು ಮೊಗ್ಗುಗಳಲಿ
ತುಂಬಿದೆ ಎನಗೆ ಮಾತಲ್ಲಿ ಹುರುಪು
ಚೆಲ್ಲಿದೆ ಬಾಳಲ್ಲಿ ಬಣ್ಣಗಳ ಹೊಳಪು
ನಿನ್ನ ಸ್ಪರ್ಶದಲಿ ಏನಿದೆ ಮಾಯೆಯೊ
ಮಳೆ ಬಿದ್ದು ತಂಪಾದ ಧರೆಯಾದೆನಲ್ಲೆ
ಚಿಲಿಪಿಲಿ ಹಕ್ಕಿಗಳ ಇಂಚರವು ನೀ ನಗಲು
ದುಃಖವ ಮರೆಸಿ ನೀ ತಂದೆ ಸುಖದ ಹೊನಲು
ಎಂದೆಂದು ನೀನಿರು ಉಸಿರಾಗಿ ನನ್ನುಸಿರಲ್ಲಿ
ನನ್ನ ಹೃದಯ ಬಡಿದಾಗ ಅದರ ಬಡಿತ ಆಗು ಅಲ್ಲಿ
ಪ್ರೀತಿಯ ದೇಗುಲ ಬೆಳಗು ಬಂದಿಲ್ಲಿ
ಜೀವವ ತುಂಬು ನನ್ನಯ ಬಾಳಲ್ಲಿ
ರಚನೆ: ಶಶಿಕುಮಾರ್ ವಿ. ಕುಲಾಲ್
No comments:
Post a Comment