Monday, May 27, 2013

ಒಂಟಿ

ಗೂಡು ಸೇರಲು ಆ ರವಿ
ಸೋಕಿದೆ ಸಂಜೆ ತಂಗಾಳಿ
ನೋಡುತ ನಿಂತಿಹೆ ನಾನಲ್ಲಿ
ಒಂಟಿಯಾಗಿಹ ಬಾಳಲ್ಲಿ

ಯಾಕೀ ಭವಣೆ ಯಾಕೀ ಬಾಳು
ಸೇರಬಾರದೆ ಭುವಿಯೊಳಗೆ
ಯಾಕೀ ಕೋಪ ಯಾಕೀ ತಾಪ
ಲೀನವಾಗಬಾರದೆ ಪಂಚಭೂತದೊಳಗೆ

ಹೇಳೋರು ಇಲ್ಲ ಕೇಳೋರು ಇಲ್ಲ
ಪ್ರೀತಿ ಎಂಬುದೇ ತಿಳಿದಿಲ್ಲ
ನಿದ್ದೆಯೂ ಇಲ್ಲ ಕನಸೂ ಇಲ್ಲ
ನನಗಾವುದರ ಅರಿವಿಲ್ಲ

ರಚನೆ: ಶಶಿಕುಮಾರ್ ವಿ. ಕುಲಾಲ್ 

No comments:

Post a Comment